Monday, September 27, 2010

ತೂರಿ ಬಂದ ಕಲ್ಲು

ಎಲ್ಲಿಂದಲೋ
ತೂರಿ ಬಂದ ಕಲ್ಲು
ಅಂತರಂಗವ ಕಲಕಿ
ರತ್ನಗರ್ಭವನೂ ಛೇಧಿಸಿ
ಮುನ್ನುಗ್ಗಿದೆ ಮನದಾಳದಿ

ಅಂತರಂಗದಿ ಹೂತಿರುವ
ದುಗುಡ-ದುಮ್ಮಾನಗಳ
ಕೊಳೆಯ ಕಣ-ಕಣಗಳನ್ನು
ಮೇಲಕ್ಕೆ ಚಿಮ್ಮಿಸಿ
ಕದಡಿದೆ ತಿಳಿನೀರಿನಂತ ಮನವ

ಎನಿತು ಕಾಲದಿಂದ
ತಿಳಿನೀರ ತೆರೆಯ ಹಿಂದೆ
ಮನದಾಳದಿ ಅಮುಕಿ
ಹುದುಗಿಸಿರುವ ನೋವುಗಳನು
ಮತ್ತೆ ಮುಕ್ತಗೊಳಿಸಿದೆ

ಕಾಲನ ಕೈಚಳ ತಡೆವರಾರು ?
ಸೆಳೆವುದು ಕೊಳೆಯ ಕಣಗಳನು
ಭಾರವಾದುದೆಲ್ಲವೂ ತಳದೆಡೆಗೆ
ಸೆಳೆವುದು ನಿಸರ್ಗ ನಿಯಮ
ಮತ್ತೆ ತಿಳಿನೀರ ತೋರುತ್ತ ಮೆರೆವುದು ಅನವರತ

No comments:

Post a Comment