Monday, September 13, 2010

ವಿರಹಿ


ಅಗಲಿದ ನಲ್ಲೆಯ
ನೆನಪಿನ ದೋಣಿಯಲಿ
ಭವದ ಜಂಝಡಗಳ ಮೀರಿ
ದೂರ ದಿಗಂತದಾಚೆ ನಿರಂತರ
ಪಯಣಿಸುತ್ತಿರುವ ಯೋಗಿ

ಅಂತೆ-ಕಂತೆಗಳ ಯೋಚನೆಯಲ್ಲಿ
ಕಾಲನ ಕೈಯೊಳಗೂ ಸಿಗದೆ
ಅನುಕ್ಷಣವೂ ಕಾಲಾತೀತವಾಗಿ
ಸಂತೆಯಲ್ಲಿಯೂ ಏಕಾಂತವಾಗಿ
ಕನಸು ಕಾಣುವ ಹೋಗಿ


ನೂರು ಮನುಜರ ನಡುವೆ
ಹಲವು ಮನಸುಗಳ ಮಧ್ಯೆ
ಏಕಾಂಗಿಯಂತೆ
ನಲ್ಲೆಯೊಡನೆ ಭಾವನಾಲೋಕದಲಿ
ವಿಹರಿಸುವ ಭಾವಜೀವಿ

No comments:

Post a Comment