Saturday, August 31, 2013

ಸಖೀ ಗೀತ

ಸಖೀ....
ತೆರಳುವುದಕ್ಕೂ
ಪೂರ್ವದಲಿ ಎನ್ನ
ಎದೆಯೊಳಗೆ ಮುಖ
ಹುದುಗಿಸಿ
ಬಿಟ್ಟ ನಿಟ್ಟುಸಿರುನ
ಕಾವು
ಇನ್ನೂ ಇದೆ....

ಅರೆಗಳಿಗೆಯಾದರೂ
ಸಿಕ್ಕ ಅನುಭೂತಿಗೆ
ಅನುಗಾಲದಿಂದ
ಹೆಪ್ಪುಗಟ್ಟಿದ
ನೋವು ಕರಗಿ
ಆ...
ಜೀವದುಂಬಿದ ಕಂಗಳಿಂದ
ಉದುರಿದ
ಕಂಬನಿಗಳು
ಎನ್ನೆದೆಯ ಚಿಪ್ಪಿನೊಳಗೆ
ಮುತ್ತಾಗಿವೆ...

No comments:

Post a Comment