Sunday, April 4, 2010

ಬುದ್ಧ ಭ್ರಮಣ

ಗೌತುಮ ಬುದ್ಧ
ಮಧ್ಯ ರಾತ್ರಿಯಲ್ಲಿ
ಎದ್ದು ಹೋಗಿದ್ದು . . . . .




ಸಂಸಾರ ತಾಪತ್ರಯಗಳನು
ತಾಳಲಾರದೆ ಹೋಗಲಿಲ್ಲ
ಹೆಂಡತಿ ಮಕ್ಕಳ ಕಾಟವನು
ತಾಳಲಾರದೆಯೂ ಅಲ್ಲ






ನಿದ್ರೆ ಬರಲಿಲ್ಲವೆಂದಲ್ಲ
ಸಕಲ ಸುಖ, ಐಶ್ವರ್ಯಗಳ ತೊರೆದು
ಬುದ್ಧಿ ಭ್ರಮಣೆಯಿಂದ
ಖಂಡಿತವಾಗಿಯೂ ಇಲ್ಲ


ರಾಜಭೋಗಗಳ ಬಿಟ್ಟು
ತನ್ನವರೆಲ್ಲರನು ತೊರೆದು
ಕಾಳ ರಾತ್ರಿಯಲಿ ಕಣ್ಮರೆಯಾದರೂ
ಲೋಕದಲಿ ಬೆಳಕಾಗಿ ನಿಂತ


ಅಹಿಂಸೆ, ಸಹಬಾಳ್ವೆ ಶಾಂತಿ
ಸಂದೇಶಗಳ ಸಾರಿ
ಮೇಲು ಕೀಳುಗಳನು ಮೀರಿ
ಸಾರಿದ "ಬುದ್ಧಂ ಶರಣಂ ಗಚ್ಛಾಮಿ"


ಯುಗಯುಗಾಂತರದಲಿ ಅಳಿಯದಂತಹ
ಬೌಧ್ಧ ಧರ್ಮವ ಸಾರುತ
ನಸುನಗುತ ನಿಂತ
ಜಗಕೆಲ್ಲ ಬೆಳಕಾಗಿ

No comments:

Post a Comment