Monday, March 8, 2010

ನಾಗರೀಕತೆ

ದೂರ ಬೆಟ್ಟದಾಚೆ
ನದಿ ತೀರದಲ್ಲಿ
ಮಂಜು ಮುಸುಕಿದ ಹಾದಿಯಲ್ಲಿ
ಕಂಡೂ ಕಾಣದಂತಿರುವ
ಗೋಪುರದ ಬೀದಿಯಲಿ
ಎಡಬದಿಯ ಮೂರನೇ ಗುಡಿಸಲು
ನಮ್ಮದಾಗಿತ್ತು


ಹಸಿರು ತುಂಬಿದ ಸಹ್ಯಾದ್ರಿ ಸಾಲಿನ
ಮಂಜು ಮುಸುಕಿದ ಹಾದಿಯಲಿ
ಹರಿವ ನೀರಿನ ಜುಳು ಜುಳು ಸದ್ದು
ನದಿ ತೀರದ ಮರಳಿನಲ್ಲಿ
ಅಳಿಸಿ ಹೋದ ಆ ನೂರು ಹೆಜ್ಜೆಗಳು
ಗತಕಾಲದ ಹರಿರುಹೊನ್ನಿಗೆ
ಮೂಕ ಸಾಕ್ಷಿಯಾಗಿವೆ


ನಾಗರೀಕತೆ ಬೆಳೆದಿದೆ ಇಂದು
ಕೆಂಪು ಮಣ್ಣಿನ ಹಾದಿಯಲಿ
ಹಸಿರೆಲ್ಲ ಕಳೆದುಹೋಗಿದೆ
ಗುಡಿಸಲು ಕಾಣೆಯಾಗಿದೆ, ಹೆಂಚಿನ ಮನೆಯೂ
ಕಾಂಕ್ರೀಟು ಕಾಲಿಟ್ಟಿದೆ ಈಗ
ಠೀವಿಯಿಂದ ಮನೆ ಮನೆಯಲ್ಲಿಯೂ ಕಾಲಿಟ್ಟಿದೆ ಟಿವಿ


ಬೆಟ್ಟಗಳ ಬಗೆದು, ಗುಂಡಿಗಳ ತೋಡಿ
ನಾಡ ಸಿರಿಯೆಲ್ಲ ಲೂಟಿಯಾಗಿದೆ
ತೇಗ, ಹೊನ್ನಿ, ಮತ್ತಿ ಶ್ರೀಗಂಧ ಮರಗಳು
ಕಾಣೆಯಾಗಿವೆ ಮಾನವನ ದುರಾಸೆಗೆ
ಕಾಡು ಕಾಣದಾಗಿದೆ
ಕುರುಚಲು ಗಿಡ-ಮರಗಳ ಮಧ್ಯೆ

No comments:

Post a Comment