Saturday, April 7, 2012

ಸಖೀಗೀತ

ಸಖೀ....
ಏನು ಬೇಕು
ಏಕೆ ಮಾತಾಡಬೇಕು
ಯಾವುದಕ್ಕೂ
ಉತ್ತರವಿಲ್ಲ ಎನ್ನಲಿ
ಸ್ವಚ್ಛಂದ ಆಗಸದ ತೆರದಿ
ಅಂತರಾಳ
ಬರಿದೋ ಬರಿದು

ಹೇಳಲೇ ಬೇಕು
ಎಂಬ ತುಡಿತ
ಗಂಟಲಿನಾಳದಲ್ಲಿ
ಸಿಲುಕಿದ ಮಾತುಗಳು
ಮನದಲ್ಲಿ ಅಲೆ-ಅಲೆಯಾಗಿ
ಮರುಕಳಿಸುತ್ತಿರುವ
ಭಾವಬಿಂದುಗಳಿಗೆ
ಪದಗಳು ಸಿಗುತಿಲ್ಲ

ನೀನು ಎದುರಾದರೆ
ಕಣ್ಣುಗಳಲ್ಲಿ
ಬರೀ ಯಾಚನೆ
ನೀನು ಮರೆಯಾದರೇ
ಶೂನ್ಯದತ್ತ ನೋಟ
ಕಣ್ನುಚ್ಚಿ ಕುಳಿತಾಗ
ಕಾಣುವ ಚಂದ್ರಬಿಂಬ
ಅದೊಂದೇ ಸಮಾಧಾನ..... :)

No comments:

Post a Comment