Saturday, October 9, 2010

ಪ್ರೇಮ ಗಂಗೆ

ಅಂತರಾಳವ ಕವಿದಿರುವ ಮಂಜು
ವಿರಸ, ನೋವುಗಳಿಂದ ಹೆಪ್ಪುಗಟ್ಟಿದ ಮನಸ್ಸು
ಬೆಚ್ಚನೆಯ ಪ್ರೀತಿಯಿಂದ ಕರಗಬೇಕಾಗಿದೆ


ದುಗುಡ ನೋವುಗಳ ಭ್ರೂಣ ಬಿರಿದು
ಸಂತಸವು ಪ್ರಸವಿಸಲು ಸಮಯ ಸರಿಯಬೇಕು
ಹಿಮಾಲಯದೆತ್ತರದಿಂದ ಮಂಜು ಕರಗಿ
ಪ್ರೇಮ ಗಂಗೆ ಪ್ರವಹಿಸಬೇಕು


ನಮ್ಮಿಬ್ಬರ ಮಧ್ಯದಲಿ ತೆಲೆಯೆತ್ತಿರುವ
ವೈಮನಸ್ಸಿನ ಗೋಡೆಯ ಪರದೆ
ಸರಿದು ಬೆಳಕು ತೂರಿ ಬರಬೇಕು ಬಾಳಿನಲಿ
ಬಂಜರಾದ ಮನದಲಿ ಪ್ರೇಮ ಮೊಳಕೆಯೊಡೆಯಬೇಕು


ನೋವಿನ ಆಲಾಪದಲಿ
ಕಾಲ ಕಳೆಯುವವನಲ್ಲ ನಾನು
ನಿನ್ನೆಡೆಗೆ ಅಡಿಯಿಡುತ ಸಾಗುತಿರುವೆ
ಮತ್ತೆ ಮಿಲನದ ವಸಂತ ಮೂಡಿಬರಲಿ

No comments:

Post a Comment