Thursday, August 12, 2010

ಹೂ...


ಯಾರದೋ ಮುಡಿಯಿಂದ
ಇನ್ಯಾರದೋ ಕೈಯಿಂದ
ದಾರಿಯಲ್ಲಿ
ಜಾರಿ ಬಿದ್ದಿರುವ ಹೂವು
ಅವರಿವರ ಕಾಲ್ತುಳಿತಕ್ಕೆ
ಸಿಲುಕಿ
ನಶಿಸಿಹೋಗುತ್ತಿದೆ



ಬೀದಿ ಬದಿಯಲ್ಲಿ
ಕೊಳೆಗೇರಿ ಮಕ್ಕಳು
ಸಿರಿವಂತರ ಮನೆಯ
ತುತ್ತು ಕೂಳಿಗಾಗಿ, ಉಂಬಳಿಗಾಗಿ
ಹಂಬಲಿಸಿ ದುಡಿಯುತ್ತ
ಕಳೆದುಕೊಂಡಿರುವ
ಬಾಲ್ಯದ ಹಾಗೆ

ಎತ್ತಿ ಹಾಕುವುದಿಲ್ಲ ಯಾರೂ
ಅದನು ರಸ್ತೆ ಬದಿಗೆ
ಯಾರ ಮುಡಿಗೆ ಸೇರಿದೆಯೋ
ಪೂಜೆಗೆಂದು ಕೊಂಡೊಯ್ಯುವಾಗ
ಕೈಜಾರಿ ಬಿದ್ದರೆ, ಆವ ದೇವರ ಅಡಿಗೆ
ಸಲ್ಲಬೇಕಾತ್ತೋ
ಯಾರೂ ಅರಿಯರು

1 comment: