Monday, March 16, 2015

ತಲ್ಲಣ

ಈಗೀಗ !!!
ಹೆಚ್ಚಾಗಿ ಎಲ್ಲರೂ
ಫಲಕ ಕಳಚಿಬಿದ್ದು ನಿಂತಿರುವ
ಕಂಬದಂತಹ ಜನರು.....
ಮುಖವೂ ಇಲ್ಲ
ಮುಖವಾಡವೂ ಇಲ್ಲಾ
ಅವರಿವರ ಹಿಂಬಾಲಿಸುವ ಬಾಲಿಶತನದಿ
ಸ್ವಂತಿಕೆಯ ಫಲಕ ಕಳಚಿ
ವ್ಯಕ್ತಿತ್ವದ ದರ್ಶನವೂ ಇಲ್ಲಾ
ಮಾರ್ಗದರ್ಶನ ಗೋ.......ವಿಂದ
ತಂಬಾಕು, ಕಡ್ಡಿಪುಡಿ, ಗುಟ್ಕಾ ತಿಂದು
ಅಲ್ಲಿ-ಇಲ್ಲಿ ಕ್ಯಾಕರಿಸಿ ಉಗಿಯುವಂತೆ
ಬಾಯಿಚಪಲಕೆ
ಘಟಾನುಘಟಿಗಳ ಉದ್ಘೋಶಿಸುವ ಇವರು
ಧರ್ಮದ ಆಫೀಮು ಸೇವಿಸಿದ
ಧರ್ಮಾಂಧರಿಗಿಂತ
ಘಾತಕರು, ಜಗದೋದ್ಧಾರದ ಸೋಗಿನಲಿ ನಲಿಯುವ
ಸ್ವಯಂಘೋಷಿತ ದೇವಮಾನವರು
ಅವರಿವರನ್ನು ತೆಗಳುತ್ತಾ
ರಾತ್ರಿ ಬೆಳಗಾಗುವುದರೊಳಗೆ
ರಾರಾಜಿಸುವ ಹಮ್ಮೀರರು
ಅರ್ಧಂಬರ್ಧ ತುಂಬಿದ ಪಾತ್ರೆ ಚೆಲ್ಲುವದಿಲ್ಲವೇ
ತುಂಬಿದಕೊಡ
ತೃಷೆ ತಣಿಯಲು ಬಯಸುವ ಜೀವಗಳ
ಕಾಯುತ್ತ ಮೂಲೆಯಲಿ
ಮೌನಗೀತೆ ಹಾಡುತ್ತಿತ್ತು......

No comments:

Post a Comment